Skip to content

New Delhi : ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ 18 ಮಂದಿ ಸಾವು, ಹಲವರಿಗೆ ಗಾಯ.

Posted in :

Aryan
Aryan

 ರೈಲಿನ ಹೆಸರಿನ ಗೊಂದಲವು ಹೊಸ ದೆಹಲಿ ರೈಲು ನಿಲ್ದಾಣದಲ್ಲಿ ಮಾರಣಾಂತಿಕ ಕಾಲ್ತುಳಿತಕ್ಕೆ ಕಾರಣವಾಯಿತು.

New Delhi Railway station February 16, 2025 | Image credits : Sushil kumar Verm

ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ : ಶನಿವಾರ ರಾತ್ರಿ ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಮಕ್ಕಳು ಸೇರಿದಂತೆ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ. ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭಕ್ಕೆ ರೈಲು ಹತ್ತಲು ಯತ್ನಿಸಿದ ಪ್ರಯಾಣಿಕರು ಹಠಾತ್‌ ನುಗ್ಗಿದ್ದರಿಂದ ಅನೇಕ ಪ್ರಯಾಣಿಕರು ಗಾಯಗೊಂಡಿದ್ದಾರೆ.

ತಡವಾಗಿ ಬಂದ ರೈಲುಗಳನ್ನು ಹತ್ತಲು ಯತ್ನಿಸಿದ ಸಾವಿರಾರು ಜನರು ಶನಿವಾರ ರಾತ್ರಿ ರೈಲು ನಿಲ್ದಾಣದಲ್ಲಿ ಕಿಕ್ಕಿರಿದು ತುಂಬಿದ್ದರು ಎಂದು ವರದಿಯಾಗಿದೆ.

ದೆಹಲಿ ಪೋಲಿಸ್‌ ಮೂಲಗಳ ಪ್ರಕಾರ, ಪ್ಲಾಟ್‌ ಫಾರ್ಮ 14 ರಲ್ಲಿ ಪ್ರಯಾಗ್‌ರಾಜ್‌ ಎಕ್ಸ್‌ಪ್ರೆಸ್‌ಗಾಗಿ ಕಾಯುತ್ತಿದ್ದ ಪ್ರಯಾಣಿಕರು ತಮ್ಮ ರೈಲಿಗಾಗಿ ಪ್ಲಾಟ್‌ ಫಾರ್ಮ್‌ 16 ರಲ್ಲಿ ಪ್ರಯಾಗ್‌ರಾಜ್‌ ಸ್ಪೆಷಲ್‌ ಆಗಮನದ ಪ್ರಕಟಣೆಯನ್ನು ತಪ್ಪಾಗಿ ಗ್ರಹಿಸಿದಾಗ ಗೊಂದಲವು ಉಂಟಾಯಿತು. ಅವರು ತಮ್ಮ ನಿರ್ಗಮನವನ್ನು ತಪ್ಪಿಸಬಹುದೆಂಬ ಭಯದಿಂದ, ಅವರಲ್ಲಿ ಹಲವರು ಇತರ ಪ್ಲಾಟ್‌ಫಾರ್ಮ್‌ಗೆ ಧಾವಿಸಿದರು, ಕಿಕ್ಕಿರಿದು ಸೇರಿದ ಜನಸಾಗರದಲ್ಲಿ ಕಾಲ್ತುಳಿತ ಉಂಟಾಗಿ ಮೂವರು ಮಕ್ಕಳು ಸೇರಿದಂತೆ 18 ಜನರು ಸಾವಿಗಿಡಾಗಿದ್ದಾರೆ, ಹಲವರು ಗಾಯಗೊಂಡಿದ್ದಾರೆ.

ರೈಲ್ವೇ ಸಚಿವಾಲಯವು ಈ ಉರದೃಷ್ಟಕರ ಘಟನೆ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.

Leave a Reply

Your email address will not be published. Required fields are marked *